( ಶ್ರೀ ಶಿವಕುಮಾರ ಮಹಾಸ್ವಾಮಿಗಳ 117 ನೇ ಜನ್ಮದಿನೋತ್ಸವ )

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ              ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ
1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿ
ಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ

ಕಲಿಯುಗದ ನಡೆದಾಡುವ ದೇವರೇ
ಹಗಲಿರುಳೆನ್ನದೆ ದುಡಿದು ಕಾಯಕಯೋಗಿಯಾದವರೇ ಅನ್ನ,ಜ್ಞಾನ ಹಾಗೂ ಅಕ್ಷರದ  ತ್ರಿವಿಧ ದಾಸೋಹಿ ಪುಣ್ಯಾತ್ಮರೇ ಆಧ್ಯಾತ್ಮಿಕ ನಾಯಕ ಸಿದ್ದಗಂಗಾ ಮಠದ ಮಹಾತ್ಮರೇ

ರಾಮನಗರದ ಮಾಗಡಿಯ ವೀರಾಪುರದ ಉಸಿರು                                                       ಬೆಳಗಿಸಿದಿರಿ ನಾಡಿನೆಲ್ಲೆಡೆ ಸಿದ್ದಗಂಗೆಯ ಹೆಸರು ಪದ್ಮಭೂಷಣ ಪಡೆದ ತುಮಕೂರಿನ ಕಲ್ಪತರು
ಜಾತಿ ಮತ ಪಂಥವ ಮೀರಿ ಬೆಳೆದ ಕರುನಾಡಿನ ರತ್ನರು

ಅಕ್ಕರೆಯಿಂದ ಅಕ್ಷರವ ಕಲಿಸಿದವರು
ಆತ್ಮೀಯವಾಗಿ ಭಕ್ತರನ್ನ ಅಪ್ಪಿಕೊಂಡವರು
ಅಜ್ಞಾನವ ತೊಲಗಿಸಿ ಜ್ಞಾನ ಪಸರಿಸಿದವರು
ಮೌನ ಮಾತಿನಿಂದ ಜಗಕ್ಕೆ ಜ್ಯೋತಿಯಾದವರು

ದೇವರಂತೆ ಬೆಳಕಾಗಿ ಪೂಜ್ಯರಂತೆ ನೆರಳಾಗಿ                   ತಂದೆಯಂತೆ ಆಶ್ರಯವಾಗಿ ತಾಯಿಯಂತೆ ಕರುಣಾಮಯಿಯಾಗಿ ಬಸವಣ್ಣನಂತೆ ಆದರ್ಶವಾಗಿ ವಿವೇಕಾನಂದರಂತೆ ಮಾದರಿಯಾಗಿ
ಸಂತನಂತೆ ಮಹಾ ಸಿದ್ದಿಗಾಗಿ ಜ್ಞಾನಿಯಂತೆ ದಾರಿದೀಪವಾಗಿ

ಶ್ರೀ ಮಠದ ಹಳೆಯ ವಿದ್ಯಾರ್ಥಿಯಿಂದ ಭಕ್ತಿಪೂರ್ವಕ ನಮನಗಳು

ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)
ಬಾಗಲಕೋಟ